ಶಿವಮೊಗ್ಗ: ಮಿಲಾದುನ್ನಬಿ ಮೆರವಣೆಗೆ ವೇಳೆ ಕಲ್ಲು ತೂರಾಟ: ನಗರದಲ್ಲಿ ಸೆಕ್ಷನ್ 144 ಜಾರಿ

ಪೊಲೀಸ್‌
Advertisement

ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಇದರ ಬೆನ್ನಲ್ಲೆ ಜನರನ್ನು ಚದುರಿಸಿ, ಕೆಲವರನ್ನ ವಶಕ್ಕೆ ಪಡೆದಿದ್ದರು. ಆನಂತರ ಕೆಲವು ಪೊಲೀಸರ ಮೇಲೂ ಕಲ್ಲು ತೂರಾಟ. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಎಸ್ ಪಿ ಮಿಥುನ್ ಕುಮಾರ್ ರವರ ಕಡೆಗೂ ಕಲ್ಲು ಬೀಸಿದ್ದಾರೆ. , ಅಲ್ಲಿದ್ದ ಮನೆಗಳು ಹಾಗೂ ವಾಹನಗಳ ಮೇಲೆ ಕಲ್ಲೂ ತೂರಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ಮಾಡಿದೆ.

ತಕ್ಷಣವೇ ಸ್ಥಳದಲ್ಲಿದ್ದ ಎಸ್​ಪಿ ಮಿಥುನ್ ಕುಮಾರ್, ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಜನರು ಗುಂಪು ಸೇರದಂತೆ ಮನವಿ ಮಾಡಿದ್ದು ವದಂತಿಗಳಿಗೂ ಕಿವಿಗೊಡದಂತೆ ಮನವಿ ಮಾಡಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಪೊಲೀಸರ ಕಂಟ್ರೋಲ್​ನಲ್ಲಿ ಆರ್​ಎಎಫ್​ ಪಡೆ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಘಟನೆಗಳ ಸಂಬಂಧ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ