ಬಾಬಾಸಾಹೇಬರ ಭಾವಚಿತ್ರ ಇಡದೇ ಅಗೌರವ ತೋರಿದ್ದ ವಾರ್ಡನ್ ಸುಧಾ ಅಮಾನತು

ಸುಧಾ
Advertisement

ದಾವಣಗೆರೆ: ಕಳೆದ ಜನವರಿ 26ರ ಗಣರಾಜ್ಯೋತ್ಸವ ದಿನದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಧ್ವಜಸ್ತಂಭದ ಬಳಿ ಇಡದೇ ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ದಾವಣಗೆರೆ ಬಿಐಇಟಿ ರಸ್ತೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಾರ್ಡನ್ ಕೆ.ಸಿ. ಸುಧಾ ಅವರನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಸ್ತು ಪ್ರಾಧಿಕಾಧಿಕಾರಿಗಳೂ ಆದ ಡಾ. ಎ.ಚನ್ನಪ್ಪ ಅವರು ಕಳೆದ ಮಾರ್ಚ್ 3ರಂದು ಅಮಾನತ್ತು ಮಾಡಿ ಆದೇಶಿಸಿದ್ದಾರೆ. ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಇಡದೇ ಅಕ್ಷಮ್ಯ ಅಪರಾಧವೆಸಗಿದ ವಾರ್ಡನ್ ಸುಧಾ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಆಗ್ರಹಿಸಿ ಹಲವು ಬಾರಿ ಜಿಲ್ಲಾಡಳಿತಕ್ಕೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ, ಸುಧಾ ಅವರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿ ಸೋಮವಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಕ್ರಮ ವಹಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದಾಗ ಅಧಿಕಾರಿಗಳು ಸುಧಾ ಅವರನ್ನು ಮಾ.3 ರಂದೇ ಅಮಾನತ್ತು ಮಾಡಿರುವುದಾಗಿ ಹೇಳಿ ಆದೇಶದ ಪ್ರತಿ ನೀಡಿದಾಗ ಸತ್ಯ ಬಹಿರಂಗಗೊಂಡಿದೆ.