ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿಗಳು, ತಮ್ಮ ಸ್ವಾಭಿಮಾನ ಮರೆತು ಅಲ್ಲಿ ಇರಬಾರದು

ಕುಷ್ಟಗಿ
Advertisement

ಕುಷ್ಟಗಿ: ಕುಷ್ಟಗಿಯ ಕಾಂಗ್ರೆಸ್ ಪಕ್ಷದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು, ಸಾಕಷ್ಟು ಸಂಖ್ಯೆಯ ಕಾರ್ಯಕರ್ತರು ಮುಖಂಡರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಇನ್ನು ಆ ಪಕ್ಷದಲ್ಲಿರುವಂತಹ ಸ್ವಾಭಿಮಾನಿಗಳು, ತಮ್ಮ ಸ್ವಾಭಿಮಾನ ಮರೆತು ಅಲ್ಲಿ ಇರುವ ಬದಲು ಬಿಜೆಪಿ ಪಕ್ಷಕ್ಕೆ ಸ್ವಾಗತದಿಂದ ಬರಮಾಡಿಕೊಳ್ಳಲು ಪಕ್ಷದ ಬಾಗಿಲು ತೆರೆದಿದೆ ಮಾಜಿ ಶಾಸಕ ಹಾಗೂ ಬಿಜೆಪಿಯ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು, ಶಾಸಕ ಬಯ್ಯಾಪುರ ತಾಲೂಕಿನ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಕೇವಲ ದೂರದಲ್ಲಿ ನಿಂತುಕೊಂಡು ಮತದಾರರ ಮನೆಯನ್ನು ಮಾತ್ರ ತೋರಿಸಲು ಹೇಳುತ್ತಾ ಇದ್ದಾರೆ. ಇಂತಹ ಬಯ್ಯಾಪುರ ನಡವಳಿಕೆಯಿಂದ ಕಾರ್ಯಕರ್ತರು, ಮುಖಂಡರು ರೋಷವಾಗಿದ್ದು ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಇರುವಂತಹ ಸ್ವಾಭಿಮಾನಿಗಳು ಆದಷ್ಟು ಬೇಗನೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರೆ. ಅಂತಹ ಮುಖಂಡರುಗಳನ್ನು ಸ್ವಾಗತಿಸಲು ಬಿಜೆಪಿ ಪಕ್ಷ ಮುಂದಾಗುತ್ತದೆ ಎಂದರು.
ಬಯ್ಯಾಪುರ ದುಡ್ಡಿನ ಮೇಲೆ ರಾಜಕಾರಣ ಮಾಡುತ್ತಾರೆ: ಕುಷ್ಟಗಿಯ ಶಾಸಕ ಬಯ್ಯಾಪುರ ಮತದಾರರನ್ನು ಹಣ ಕೊಟ್ಟು ಖರೀದಿ ಮಾಡಿಕೊಂಡರೆ ಸಾಕು ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತೇನೆ ಎಂಬ ದುರುದ್ದೇಶವನ್ನು ಇಟ್ಟುಕೊಂಡಿದ್ದಾರೆ. ಇವರು ದುಡ್ಡಿನ ಮೇಲೆ ರಾಜಕಾರಣ ಮಾಡುವಂತಹ ಶಾಸಕರಾಗಿದ್ದಾರೆ. ನನ್ನ ಹತ್ತಿರ ಹಣ ಇಲ್ಲ ಆದರೆ ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ನಮ್ಮ ಜೊತೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಕೈಜೋಡಿಸಿದರೆ ಸಾಕು ಕ್ಷೇತ್ರದ ಅಭಿವೃದ್ಧಿ ಮಾಡಲು ಎಲ್ಲರೂ ಕೂಡ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.
ದುರಾಡಳಿತ, ಕಾಂಗ್ರೆಸ್ ಪಕ್ಷದ ಮುಖಂಡರ ಕೆಲಸ ಏನು ಇರುವುದಿಲ್ಲ.ಚುನಾವಣೆ ಮಾಡುವುದು ಲಿಂಗಸೂರು ಜನತೆ,ಹಣ ಕೊಡುವುದು ಲಿಂಗಸೂರು ಜನತೆ.ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರದ ಕಾರ್ಯಕರ್ತರು ಬೇಕು ಗೆದ್ದ ನಂತರ ಕಾರ್ಯಕರ್ತರು ಶಾಸಕ ಬಯ್ಯಾಪುರ ಅವರಿಗೆ ಬೇಡವಾಗಿದ್ದಾರೆ.ಕೊಳಕು ಕುಷ್ಟಗಿಯನ್ನು ತೊಳೆದು ಹಾಕಿ.ಹೊಸ ಕುಷ್ಟಗಿಯನ್ನು ಕಟ್ಟಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ನನಗೆ ಕೈಜೋಡಿಸಬೇಕು.ಇನ್ನು ಮುಂದೆ ಕುಷ್ಟಗಿ ಪಟ್ಟಣದಲ್ಲಿ ಅಭಿವೃದ್ಧಿಪರುವ ಆರಂಭಗೊಳ್ಳಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ.ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರು ಮತದಾರರು ಮುಂದಾಗಬೇಕಾಗಿದೆ ಎಂದರು.
ಸಚಿವರಾಗವು ಯೋಗ ಇದೆ: ಕುಷ್ಟಗಿ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡನಗೌಡರನ್ನು ಗೆಲ್ಲಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಅವರನ್ನು ಸಚಿವರನ್ನಾಗಿಸುವ ಕೆಲಸವನ್ನು ನಮಗೆ ಬಿಡಿ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ‘ಶ್ರಮಪಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಪ್ರತಿ ಬೂತ್‌ನಲ್ಲಿಯೂ ಅತಿ ಹೆಚ್ಚು ಮತ ಬರುವಂತೆ ಕೆಲಸ ಮಾಡಬೇಕು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಬಳಿ ಹಣ ಇರಬಹುದು. ಆದರೆ, ಹಣ ಇಲ್ಲದಿದ್ದರೂ ದೊಡ್ಡನಗೌಡ ಹೃದಯ ಶ್ರೀಮಂತಿಕೆ ಉಳ್ಳವರು.ಮತ್ತೆ ಈ ಬಾರಿ ರಾಜ್ಯ ಮತ್ತು ದೇಶದಲ್ಲಿ ಡಬಲ್ ಎಂಜಿನ್‌ ಸರ್ಕಾರ ಬರಲಿದೆ’ ಎಂದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದರು.
ಸಚಿವ ಬಿ.ಶ್ರೀರಾಮುಲು ಮಾತನಾಡಿ,ಇಲ್ಲಿಯ ಮತದಾರರು ಈ ಹಿಂದೆ ದೊಡ್ಡನಗೌಡ ಪಾಟೀಲರನ್ನು ಎರಡು ಬಾರಿ ಗೆಲ್ಲಿಸಿದರೂ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. ಈ ಬಾರಿ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ,ಸಂಸದ ಸಂಗಣ್ಣ ಕರಡಿ, ಸಚಿವರಾದ ಹಾಲಪ್ಪ ಆಚಾರ, ಆನಂದ ಸಿಂಗ್,ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ,ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರು, ಶರಣು ತಳ್ಳಿಕೇರಿ, ಕೆ.ಮಹೇಶ ಹಾಗೂ ನವೀನ್ ಗುಳಗಣ್ಣನವರ ಇದ್ದರು.