ಎತ್ತ ಸಾಗುತ್ತಿದೆ “ಸಮೃದ್ಧ ಕರ್ನಾಟಕ”? ಸಿಎಂಗೆ ಪ್ರಲ್ಹಾದ ಜೋಶಿ ಪ್ರಶ್ನೆ

ಪ್ರಲ್ಹಾದ್ ಜೋಶಿ
Advertisement

ಬೆಂಗಳೂರು: ಎತ್ತ ಸಾಗುತ್ತಿದೆ “ಸಮೃದ್ಧ ಕರ್ನಾಟಕ”? #ಉತ್ತರಿಸಿಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ ಸಮಗ್ರ ಪೋಸ್ಟ್‌ ಮಾಡಿರುವ ಅವರು, “ಎತ್ತ ಸಾಗುತ್ತಿದೆ “ಸಮೃದ್ಧ ಕರ್ನಾಟಕ”? #ಉತ್ತರಿಸಿಸಿದ್ದರಾಮಯ್ಯನವರೇ

  • ಮಠ ಮಂದಿರಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ
  • ರಸ್ತೆ – ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ
  • ರೈತರಿಗೆ ಕೃಷಿಗೆ ಬೇಕಾದ ವಿದ್ಯುತ್ ಸಿಗುತ್ತಿಲ್ಲ
  • ಸರಕಾರದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ತಿಂಗಳ ಸಂಬಳ ಸಿಗುತ್ತಿಲ್ಲ
  • ಬಿಜೆಪಿ ಸರಕಾರ ಅನುಮೋದನೆ ನೀಡಿದ ಎಲ್ಲಾ ಯೋಜನೆಗಳಿಗೂ ತಡೆಹಿಡಿಯಲಾಗಿದೆ
  • ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಅನುದಾನವಿಲ್ಲ
  • ನೀರಾವರಿ ವ್ಯವಸ್ಥೆಗೆ ಯೋಜನೆಯಿಲ್ಲ
  • ಬಹುಸಂಖ್ಯಾತ ಹಿಂದೂಗಳ ಅಭಿವೃದ್ಧಿಗೆ ಯಾವುದೇ ಯೋಜನೆಯಿಲ್ಲ
  • ಸಚಿವರ ಹೊಸ‌ ಕಾರು ಖರೀದಿಗೆ ಇರುವ ಹಣ, ರೈತರ ಬೆಳೆ ನಾಶದ ಪರಿಹಾರಕ್ಕಿಲ್ಲ
  • ರಾಜ್ಯದುದ್ದಗಲದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ
    ಮುಖ್ಯಮಂತ್ರಿಗಳೇ, ಕರುನಾಡನ್ನು ನಾಶ ಮಾಡುವ ಪ್ರಯತ್ನ ಬಿಟ್ಟು, ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು, ನಿಮ್ಮ ನಿಮ್ಮಲ್ಲೇ ರಾಜಕೀಯ ಕಿತ್ತಾಟ ನಾಟಕವನ್ನು ಬಿಟ್ಟು, ರಾಜ್ಯದ ಪ್ರಗತಿಗಾಗಿ ರಾಜ್ಯದ ಜನರ ಏಳಿಗೆಗಾಗಿ ಯೋಚಿಸಿ ಶ್ರಮಿಸಿ
    ಇದು ಕೇವಲ ನಮ್ಮ ಆಗ್ರಹವಲ್ಲ, ಸ್ವಾಭಿಮಾನಿ ಕನ್ನಡಿಗರ ಆಗ್ರಹ! ಎಂದಿದ್ದಾರೆ