ಇವರ ಬಗ್ಗೆ ಮಾತನಾಡಿ ಮೈಲೇಜ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ

Advertisement

ಮಂಡ್ಯ: ಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಪ್ರಾರಂಭದಲ್ಲಿ ಪುಟ್ಟರಾಜು ಸವಾಲು ಹಾಕಿದ್ರು. ಇದಕ್ಕೆ ಪೂರಕವಾಗಿ ಸಂಸದೆ ಸುಮಲತಾ ಅಂಬರೀಶ್ ನನ್ನ ತಾಕತ್ತನ್ನು ನನ್ನ ಚುನಾವಣೆಯಲ್ಲಿ ತೋರಿಸಿದ್ದೇನೆ ಮತ್ತೆ ತೋರಿಸುವ ಅಗತ್ಯವಿಲ್ಲ ಎನ್ನುವ ಮೂಲಕ ಸುಮಲತಾ ಖಡಕ್ ಆಗಿ ಉತ್ತರ ನೀಡಿದ್ದರು. ಇದೀಗ ಸುಮಲತಾ ಹೇಳಿಕೆಗೆ ಪುಟ್ಟರಾಜು ಕೌಂಟರ್ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಜನ ಬಹಳಷ್ಟು ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ್ದಾರೆ ಸೋಲು ಗೆಲುವನ್ನು ಎಲ್ಲರಿಗೂ ಜನ ತೋರಿಸಿದ್ದಾರೆ, ಭಾಷಣ ಮಾಡುವ ಅಗತ್ಯ ಬೇಡ. ನನ್ನ ಕ್ಷೇತ್ರದಲ್ಲಿ ಬಂದು ರಾಜಧನ ಏನೋ ಆಗಿದೆ ಅಂದ್ರೆ ಯಾರಿಗೆ ಅವರು ಮಾತನಾಡೋದು ಹಾಗೆ ಮಾತನಾಡಿದ್ರೆ ಅದು ನನಗೆ ತಾನೇ. ಅದಕ್ಕೆ ನಾನು ತಾಕತ್ ಇದ್ರೆ ಹೆಸರು ಬಹಿರಂಗಪಡಿಸಬೇಕು ಎಂದು ಹೇಳಿದ್ದೇನೆ. ಈಗಲೂ ಕೇಳುತ್ತೇನೆ ತಾಕತ್ ಇದ್ರೆ ಹೆಸರು ಬಹಿರಂಗ ಪಡಿಸಬೇಕು. ನಾನು ಗಣಿ ಇಲಾಖೆಗೆ ಹೋಗಿ ನೋಡುವ ಕೆಲಸ ನನ್ನದು ಅಲ್ಲ ಆರೋಪ ಮಾಡಿರೋದು ನೀವು, ನೀವು ಹೋಗಿ ನೋಡಿ. ಸರ್ಕಾರ ಇದೆ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ನೀವು ಚುನಾವಣೆ ಹೋಗಬೇಕು, ಯಾವ ಪಾರ್ಟಿಯಲ್ಲಿ ನಿಲ್ಲುತ್ತೀರಾ ಎಂದು ಹೇಳಬೇಕು ಎಲ್ಲಿ ಏನೇನು ರಾಜಕಾರಣ ಮಾಡ್ತಾ ಇದೀರಾ ಎಂದು ಗೊತ್ತು. ಯಾವ ಪಕ್ಷದವರು ಏನು ಹೇಳಬೇಕು ಎಲ್ಲಾ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಜನ ಅಂಬರೀಶ್ ಅಣ್ಣನಿಗೂ ಬುದ್ಧಿ ಕಲಿಸಿದ್ದಾರೆ, ನನ್ನನ್ನು 2 ಸಲ ಸೋಲಿಸಿದ್ದಾರೆ. ಜೆಡಿಎಸ್‍ನ್ನು ದೂರಿದರೆ ಲೀಡರ್ ಅಂತಾ ಹೇಳ್ತಾರೆ ಅಂತಾ ಸುಮಲತಾ ಅಂದುಕೊಂಡಿದ್ದಾರೆ. ಮಂಡ್ಯ ಜನ ಒಂದು ಅಂಬರೀಶ್ ಅಣ್ಣನ ಅಭಿಮಾನಕ್ಕೆ ಗೆಲ್ಲಿಸಿದ್ದಾರೆ ಸುಮಲತಾ ಹೆಸರಿಗಾಗಿ ಜನರು ಗೆಲ್ಲಿಸಿಲ್ಲ. ಮುಂದೆ ಇವರು ಮಾಡಿರುವ ಕೆಲಸಕ್ಕೆ ಮಂಡ್ಯ ಜಿಲ್ಲೆಯ ಜನ ತೋರಿಸುತ್ತಾರೆ ಇವರು ಮಾಡಿರುವ ಕೆಲಸಕ್ಕೆ ಜನರೇ ಸರ್ಟಿಫಿಕೇಟ್ ಕೊಡ್ತಾರೆ. ಅವರ ಬಗ್ಗೆ ಮಾತಾಡಿದ್ರೆ ನಮಗೆ ಮೈಲೇಜ್ ಬರಲ್ಲ ನಮ್ಮ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಮಂಡ್ಯದಲ್ಲಿ ದೇವೇಗೌಡರು, ಕುಮಾರಣ್ಣನ ಗುಣಗಾನ ಮಾಡಿದ್ರೆ ಮೈಲೇಜ್ ಬರುತ್ತದೆ. ಇವರ ಬಗ್ಗೆ ಮಾತನಾಡಿದ ಮೈಲೇಜ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು