ವಿಶ್ವಕಪ್‌ ಕ್ರಿಕೆಟ್: ಭಾರತದ ಗೆಲುವಿಗಾಗಿ ಇಳಕಲ್‌ನಲ್ಲಿ ಪೂಜೆ

Advertisement

ಬಾಗಲಕೋಟೆ: ಅಹಮದಾಬಾದ್‌ನಲ್ಲಿ ನಡೆದಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಜಯಗಳಿಸಲಿ ಎಂದು ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ನಾಗಲಿಕ ಸಮಾಜದ ಬಾಂಧವರು ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಮಾಜದ ಅಧ್ಯಕ್ಷ ಮಹಾಂತೇಶ ಸಮಾಳದ ನೇತೃತ್ವದಲ್ಲಿ ಹಿರಿಯರಾದ ಮಹಾಂತಪ್ಪ ಚೆನ್ನಿ ವೀರೇಂದ್ರ ಕವಿಶೆಟ್ಟಿ, ಶ್ರೀಶೈಲ ಮಸ್ಕಿ, ಶಂಕರ್ ಶಿವಬಲ್ಲ, ಬಸು ಬಂಡೆಪ್ಪನವರ್, ವಿಜಯ್ ಕಂಪ್ಲಿ, ಮಹಾಂತೇಶ ಸೋಲಾಪುರ, ಶಂಕರಪ್ಪ ಕವಿಶೆಟ್ಟಿ, ಶಂಕರ ಸಮಾಳದ ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.