ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ ಸದಾಶಿವನಗರದ ನಿವಾಸದಲ್ಲಿ ಡಿಕೆಶಿವಕುಮಾರ್ ಭೇಟಿ ಮಾಡಿದ್ದಾರೆ.
ಕುಣಿಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮುದ್ದಹನುಮೇಗೌಡ, ಸಂಸದ ಸ್ಥಾನಕ್ಕೆ ಟಿಕೇಟ್ ತಪ್ಪಿದ್ದರಿಂದ ವಿಧಾನಸಭೆಗೆ ಟಿಕೇಟ್ ನೀಡುವಂತೆ ಒತ್ತಡಕ್ಕೆ ಮುಂದಾಗಿದ್ದಾರೆ. ಕುಣಿಗಲ್ ನಲ್ಲಿ ಡಿಕೆಶಿವಕುಮಾರ್ ಸಂಬಂಧಿ ಡಾ.ರಂಗನಾಥ್ ಹಾಲಿ ಕಾಂಗ್ರೆಸ್ ಶಾಸಕರಾಗಿದ್ದಾರೆ. ಲೋಕಸಭೆ ಟಿಕೆಟ್ ಬದಲು ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಡಿಕೆಶಿವಕುಮಾರ್ ಮೇಲೆ ಮುದ್ದಹನುಮೇಗೌಡ ಒತ್ತಡ ಹಾಕಿದ್ದಾರೆ.